ಹಿಮಗಾನ

ಸೀಮಾಂತ ಪ್ರದೇಶದಲಿ ಕರಗುವ
ಶಿಲ್ಪವ ಕಂಡೆ ನಾನು
ಸರ್ವದೂರದಲಿ ಹಿಮ ಪ್ರತಿಮೆ
ಯಾತನಾಮಯ ಹಿಮಗಂಧ ಸಂಗೀತ
ಅಗಾಧ ಹಿಮ
ಮಾಯಾ ಮಹಿಮೆ.
ಉದುರುವ ಕಲೆ ಶಿಲ್ಪಕೆ ಸಿದ್ಧಿಸಿತೆಂತು
ಶುಭ್ರವಿಭೋರ ಕಣ ಸ್ಪಂದನ
ರೆಪ್ಪೆ ತೆರವಾದಾಗ
ಹರಡಿದ ವಿಹಗಗಣ
ಇನ್ನೂ ನನಗೆ ಹೊಳೆಯದಿರೆ
ರೆಪ್ಪೆಯಿಲ್ಲದ ದೃಷ್ಟಿಯನೀಗ
ಈ ಹಿಮದಲ್ಲಿ ತುಂಬಿ ಬಿಡಲೆ.
ನೋಡುವವು ಬಹುಶ
ತಳಮಳಿಸುವ ಚಿಟ್ಟೆಯ ಮುಖ ಶೋಧಿಸಿ
ಸೀಸ ಹಣಗಳಲಿ ನೋವಿನ
ಹಿಮಪೂರ್ಣಾಲಯ ಮರೆಸಿ
ಸುರಕ್ಷಿತವಾಗಿ ಅಡಗಿಸಿ ಇನ್ನೂ
ನನ್ನ ಕಣ್ಣಗೊಂಬೆಯಲಿ ತೂಗುವುದು.
ಹಗುರಗಾಳಿಯ ಲಯಕ್ಕೆ
ನನ್ನ ಸಂದರ್ಭೋಚಿತ
ಅಸ್ತಿತ್ವದಿಂದ
ಹೇಗೆ ಕಳೆಯಿತು
ಗ್ರೇಸನ ಪ್ರಾರ್ಥನೆಯ ಚಂದ್ರಹಾಸ
ಸಾಯಂಕಾಲ ಚಂದ್ರೋತ್ಸವದಿಂದ
ನಿನಗೆ ಮೆಚ್ಚಿದ ಒಂದು
ಅಪಾರ ಭಾವ ಸತ್ಯ
ಬಹುಶ…..
ಬಹುಶ ಇನ್ನೂ ಕರಗುವ ಹಿಮಕಣ
ಕಣ್ಣಗೊಂಬೆಯಲ್ಲಿ
ಸರ್ವತ್ರ ಉದುರುವ
ಈ ಹಿಮದಾತಂಕಗಾನ
ದೂರದ ಶಾಪದ ನೋವಿನ ಗೀತ
ನನಗಿದು ಶಾಪ ವ್ಯಾಕುಲ ವರದಾನ
ನಿನ್ನ ಮನದಂತಹ
ನನಗೆಂದೂ ಹೊಂದಿಕೆಯಾಗದ ಕವನ.
*****
ಮೂಲ: ನೀಲಿಮಾ ಮೋಡಕ್
(ಮರಾಠಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಿಗ
Next post ಬೇಡದುದನೆಳೆದು ಕೊಂಡೊಡಿನ್ನೇನು?

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys